ಅಧ್ಯಕ್ಷರ ಸಂದೇಶ
ಕರ್ನಾಟಕದ ಹೆಸರನ್ನು, ಉಸಿರನ್ನು ಹೊತ್ತ ಕನ್ನಡದ ಮಾತೃಸಂಸ್ಥೆ ಧಾರವಾಡದ ಕೆ ಸಿ ಸಿ ಬ್ಯಾಂಕು, ಈ ಬ್ಯಾಂಕು ಏಕಾ ಏಕಿಯಾಗಿ ಬೆಳೆದು ಬಂದುದಲ್ಲ. ಇದಕ್ಕೆ 100 ವರ್ಷಗಳ ಜೀವಂತ ಇತಿಹಾಸವಿದೆ, ಸಂಸ್ಥೆಯ ಇತಿಹಾಸ, ಬದಲಾವಣೆಯ ಚಿತ್ರಗಳು ಜನರ ಕಣ್ಣ ಮುಂದೆ ದೃಶ್ಯ ಕಾವ್ಯದಂತೆ ಇದೆ. ಹೊಸ ಮಳೆ ಪ್ರಾರಂಭವಾಗಿ ಹೊಸ ನೀರು ಹರಿಯುತ್ತಿದೆ. ಬ್ಯಾಂಕಿನ ಸೇವೆ ನಿರಂತರ ಹರಿಯುವ ಸಲಿಲದಂತೆ ಇದೆ.
ಮಧ್ಯವರ್ತಿ ಬ್ಯಾಂಕ ಆರಂಭವಾಗಬೇಕು ಎಂಬ ಕನಸಿಗೆ ಬಣ್ಣ ತುಂಬಿದವರು ದಿವಾನ ಬಹಾದ್ದೂರ ಲಿಂ. ಎಸ್ ವ್ಹಿ ಮೆಣಸಿನಕಾಯಿ ಹಾಗೂ ರಾವ್ ಬಹದ್ದೂರ ಆರ್ ಸಿ ಅರಟಾಳರವರು. 1916 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿ ಸಹಕಾರ ಕ್ಷೇತ್ರವನ್ನು ಸಮೃಧ್ಧಿಗೊಳಿಸಿದರು. ಉತ್ತರ ಕರ್ನಾಟಕ ಉರಿ ಬಿಸಿಲು, ಹಗಲು ರಾತ್ರಿಯನ್ನದೇ ರೈತರ ಮನ-ಮನೆ ಮುಟ್ಟಿ ಜಾಗೃತಿ ಮೂಡಿಸಿದ ಅವರ ನೆನಹು ಸಹಕಾರಿಗಳ ಬಾಳಿನ ಬುತ್ತಿ,

SHRI MALLIKARJUN A HORAKERI
ಅಧ್ಯಕ್ಷರು ಕೆ ಸಿ ಸಿ ಬ್ಯಾಂಕ್ ಲಿ., ಧಾರವಾಡ.